ಪ್ರಾರಂಭ ಪದದ ಹುಡುಕು
ತನಗೆ ಹತೋಶ್ವತ್ಥಾಮೋಯೆನಲಕ್ಕುಮೆ ಯಮಪುರಕ್ಕೆ ಗುರು ಪೋಪೆಡೆಯೊಳ್ಘನಕುಂಜರ ಎಂದೆಂಗುಮೇಜನರಂಜನೆಗರಿಯಲಾದುದಿಲ್ಲಲಮಗನಂ
ತನಯನೆನಗೆಂದು ಮನ್ನಿಸಿತನಗುರುಗಜ್ಜಕ್ಕೆ ಪಾಕಶಾಸನನರ್ಧಾಸನಮೇರಿಸಿ ನೀರೇರಿಸಿಮನುಜಂಗಂ ಮಾನ್ಯ ಪದವಿಯಂ ಮಾಡಿದನೇ॥೪೦॥
ತನುಜಾನುಜರ ವಿಯೋಗದಮನಃಕ್ಷತಂ ನೋಯಿಸಲ್ಕೆ ನೆರೆಯದೆ ಸಮರಾವನಿಜಾತ ಚರಣಕ್ಷತಮಿನಿಸು ನೋಯಿಕುಮೆ ವಜ್ರಮನನಪ್ಪೆನ್ನಂ॥೧೯॥
ತನ್ನೊಡವುಟ್ಟಿದರ್ ಪೆಸರ ನಾಲ್ವರೊಳೊರ್ವರುಮಿಲ್ಲದಿರ್ದೊಡಂತನ್ನಸುವಂ ನಿವೇದಿಸುವನಗ್ನಿಗೆ ಧರ್ಮತನೂಜನೆಂದೊಡಾನೆನ್ನೊಡವುಟ್ಟಿದರ್ ಪೆಸರ ನೂರ್ವರೊಳೊರ್ವರುಮಿಲ್ಲ ಬಾಳ್ವೆನೆಂಬೆನ್ನಳಿಯಾಸೆಯಂ ಬಿಸುಟೆನಿನ್ನವರಾದುದನಾಗದಿರ್ಪೆನೇ॥೯॥
ತಪನಸುತಂ ಬೇರಾಂ ಬೇರೆ ಪೊಲ್ಲದಂ ನುಡಿದನಾವಗಂ ರಕ್ಷಿಪ ಕಯ್ದುವನೆನಲಾ ಮರೆಯಪಾಂಡವಂ ಬಗೆದು ನೋಳ್ಪೊಡಶ್ವತ್ಥಾಮಂ॥೨೦॥
ತರಣಿತನಯಾನನೇಂದುಸ್ಮರಣದೆ ಕಯ್ಗಣ್ಮುವೆನ್ನ ಶೋಕಮಹಾಸಾಗರಮಂ ತವೆಪೀರ್ದುದು ಭೀಕರಮತ್ಕೋಪಾಗ್ನಿ ಬಾಡಬಾಗ್ನಿ ತೆರದಿಂ॥೩೭॥
ತರುಣ ಯುವ ವೃದ್ಧ ವಿಕ್ರಮಪರಿಣತರುರದಿಕ್ಕಿ ಸಿಂಹಾಸಾಹಸನಿವನುಂತರುಣನೆ ಆನುಂ ಯುವನೆನೆಸುರಪಗಾನಂದನಂ ಮಹಾಜರ್ಜರನೇ॥೫೯॥
ತರುಣೋತ್ತುಂಗಶಶಾಂಕಖಂಡಮೆ ಭುಜಂಗೇಂದ್ರನಂಕುರಮುನ್ಮೀಲಿತಮಟ್ಟಹಾಸಮೆ ದಳಾನೀಕಂ ವೃಷಂ ಪುಷ್ಪ ಮೀಶ್ವರಶೈಲಂ ಫಲಮಾಗೆ ಕೋಮಲಮುಖೀಗೌರೀಲತಾಶ್ಲಿಷ್ಟ ಶಂಕರಕಲ್ಪದ್ರುಮನೀಗಭೀಷ್ಟ ಫಲಮಂ ಚಾಳುಕ್ಯನಾರಾಯಣಂ
ತುಂಗ ಕುರುವಂಶಮಯಶೋಭಂಗಂ ಛಿದ್ರಿತಮದೆನ್ನ ದೂಸರಿನಾಯ್ತಾನುಂ ಗಡ ಕುರುರಾಜನೆ ನೀಮುಂ ಗಡ ಸಂಧಾನವೇಳ್ದಿರೆನಗರಸು ಗಡಾ॥೩॥
ತುರುಗೋಳೊಳ್ ಪೆಣ್ಬುಯ್ಯಲೊಳರಿವೆಸದೊಳ್ ನಂಟನೆಡರೊಳೂರಳಿವಿನೊಳಂತರಿಸಂದು ಗಂಡುತನಮನೆನೆರಪದವಂ ಗಂಡನಲ್ಲನೆಂತುಂ ಷಂಡಂ॥೨೪॥
ತುರುವಂ ಕಳಿಸುವ ಕೃಷ್ಣೆಯನಿರಿಯಂ ಪಿಡಿದುರ್ಚವೇಳ್ವ ಕೊಳನಂ ಪಿಂದುಂಪೆರಗಾಗಿ ಪುಗುವ ದುರ್ನಯಮರಿಪವೆ ಕೌರವನ ರಾಜ್ಯದಾಯದ ಕುಂದಂ॥೧೦॥
ತೆರಪಂ ನಿಟ್ಟಿಸಿ ಕುರುಪತಿಬರಸಿಡಿಲೆರಗುವವೊಲೆರಗಿಪೊಯ್ಯಲೊಡಂ ಮೆಯ್ಯರಿದು ಪವನಜನು ಮೇನೆಂದರಿಯದೆ ಮತಿವಿಕಳನಾಗಿ ಮೂರ್ಚ್ಛೆಗೆ ಸಂದಂ॥೨೬॥